بسم الله الرحمن الرحيم
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಮಾನವನ ಸೃಷ್ಟಿಯ ಉದ್ದೇಶ
ಮಾನವನಿಗೆ ಒಬ್ಬ ಸೃಷ್ಠಿಕರ್ತನಿದ್ದಾನೆ, ಅವನೇ ಮಾನವನಿಗೆ ಜೀವನವನ್ನು ನೀಡಿ ಬದುಕಲು ಬೇಕಾದ ಅಗತ್ಯ ವಸ್ತುಗಳನ್ನು ದಯಪಾಲಿಸಿ ಅವನ ಪರಿಪಾಲನೆ ಮಾಡುತ್ತಾನೆ. ಅವನು ಮಾನವನನ್ನು ಒಂದು ಪರೀಕ್ಷೆಯ ಉದ್ದೇಶದಿಂದ ಸೃಷ್ಠಿಸಿದ್ದಾನೆ.
ಆದ್ದರಿಂದ ಮರಣದ ನಂತರ ಪುನಃ ಜೀವಂತಗೊಳಿಸಿ ಅವನ ವಿಚಾರಣೆ ನಡೆಸುವನು ಮತ್ತು ಈ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಅವನಿಗೆ ಶಾಶ್ವತ ಸುಖದ ಸ್ವರ್ಗ ನೀಡುತ್ತಾನೆ. ಮಾನವನು ಪರೀಕ್ಷೆಯಲ್ಲಿ ವಿಫಲಗೊಂಡರೆ ಶಾಶ್ವತ ಯಾತನೆಯ ನರಕಕ್ಕೆ ತಳ್ಳುತ್ತಾನೆ.
ದೇವನೊಡನೆ ಮಾನವನ ಒಪ್ಪಂದ
ಆತ್ಮ ಲೋಕದಲ್ಲಿ ಅಲ್ಲಾಹನು ಎಲ್ಲಾ ಮಾನವರ ಆತ್ಮಗಳನ್ನು ಒಟ್ಟುಗೂಡಿಸಿ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ “ನಾನು ನಿಮ್ಮ ಪ್ರಭುವಲ್ಲವೇ” ಎಂದು ಕೇಳಿದಾಗ ಅವರು “ಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು ಮತ್ತು ಆರಾಧ್ಯ, ಇದಕ್ಕೆ ನಾವು ಸಾಕ್ಷ್ಯವಹಿಸುತ್ತೇವೆ” ಎಂದರು.
ಅಲ್ಲಾಹನು ಹೇಳಿದನು; “ಚೆನ್ನಾಗಿ ತಿಳಿದುಕೊಳ್ಳಿರಿ, ನಾನಲ್ಲದೆ ಬೇರೆ ಯಾರೂ ಪೂಜೆಗೆ ಅರ್ಹನಿಲ್ಲ. ನನ್ನ ಹೊರತು ಇನ್ನಾರೂ ನಿಮ್ಮ ಪ್ರಭು, ಪಾಲಕ, ಸಂರಕ್ಷಕನೇ ಇಲ್ಲ, ನನ್ನೊಡನೆ ಮತ್ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ನಾನು ನಿಮ್ಮನ್ನು ಭೂಲೋಕಕ್ಕೆ ಕಳುಹಿಸುವೆನು.
ಅಲ್ಲಿಂದ ನೀವು ಮರಳಿ ಪರಲೋಕಕ್ಕೆ ಬರುವಿರಿ, ಆಗ ನಾನು ನಿಮ್ಮ ಪಾಪಗಳ ನಿಮಿತ್ತ ನಿಮ್ಮನ್ನು ಹಿಡಿಯುವಾಗ ನಾವು ಈ ಬಗ್ಗೆ ಅಜ್ಞಾನಿಗಳಾಗಿದ್ದೆವು ಎಂದು ನೀವು ಹೇಳಬಾರದು ಅಥವ ದೇವಸಹಭಾಗಿತ್ವವನ್ನು ನಮಗಿಂತ ಮುಂಚೆ ನಮ್ಮ ಪೂರ್ವಿಕರು ಪ್ರಾರಂಭಿಸಿದ್ದರು.
ನಾವು ಅವರ ಸಂತತಿಯಲ್ಲಿ ಜನಿಸಿದವರು. ಆ ದುರಾಚಾರಿಗಳು ಮಾಡಿದ ಅಪರಾಧಕ್ಕಾಗಿ ನೀನು ನಮ್ಮನ್ನು ಶಿಕ್ಷಿಸುವಿಯಾ ಎಂದು ಕೇಳಬಾರದು.
ಈ ವಿಷಯವನ್ನು ನೆನಪಿಸಲಿಕ್ಕಾಗಿ ಸ್ವತಃ ನಿಮ್ಮ ಮಧ್ಯೆಯಿಂದಲೇ ನಿಮ್ಮ ಬಳಿಗೆ ನನ್ನ ಸಂದೇಶವಾಹಕರನ್ನು ಕಳುಹಿಸುವೆನು, ಯಾರು ಅವರನ್ನು ಅನುಸರಿಸುವನೋ ಮತ್ತು ತನ್ನನ್ನು ಸಂಸ್ಕರಿಸಿಕೊಳ್ಳುವನೋ ಅಂತಹವರಿಗೆ ಯಾವುದೇ ಭಯ ಮತ್ತು ವ್ಯಥೆಯ ಸಂಭವವೇ ಇಲ್ಲವೆಂಬುದನ್ನು ತಿಳಿದುಕೊಳ್ಳಿರಿ.
ಯಾರು ನಮ್ಮ ಸಂದೇಶವನ್ನು(ಖುರ್ಆನ್) ಸುಳ್ಳಾಗಿಸುವರೋ ಮತ್ತು ಅವುಗಳ ವಿರುದ್ಧ ಉದ್ಧಟತನ ತೋರುವರೋ ಅವರು ನರಕಾಗ್ನಿಗೆ ಪ್ರವೇಶಿಸಿ ಅಲ್ಲಿ ಸದಾಕಾಲ ನರಳುತ್ತಿರುವರು”
ಈಗ ಮಾನವ ಇಹಲೋಕಕ್ಕೆ ಬಂದು ತನ್ನ ನೈಜ ಸೃಷ್ಠಿಕರ್ತ ಪ್ರಭುವಿನಿಂದಲೇ ಅಜ್ಞಾನಿಯಾಗಿದ್ದಾನೆ ಮತ್ತು ಇಲ್ಲಿ ತಾನು ಬಂದಿರುವ ಉದ್ದೇಶವನ್ನೂ ಮರೆತಿದ್ದಾನೆ. ಅವನು ಹುಟ್ಟಿ ಬೆಳೆದ ಪರಿಸರದಲ್ಲಿರುವ ಮೂಢ ನಂಬಿಕೆಗಳು ಅಲ್ಲಿಯ ತಪ್ಪು ಆಚಾರ ವಿಚಾರಗಳನ್ನು ಮತ್ತು ನಡೆದುಬಂದ ಸಂಪ್ರದಾಯಗಳನ್ನು ಅವಲಂಬಿಸುತ್ತಿದ್ದಾನೆ.
ಈಗ ಅವನಿಗೆ ತನ್ನ ಪ್ರಭುವಿನ ಕೃಪೆಯಿಂದ ನೈಜ ಪ್ರಭು ಯಾರು ಮತ್ತು ಸನ್ಮಾರ್ಗ ಯಾವುದು ಎಂಬೆಲ್ಲಾ ಅರಿವು ಆಗಿದೆ. ಅವನು ತನ್ನ ಪ್ರಭುವಿನ ತೃಪ್ತಿಯನ್ನು ಪಡೆಯಲು ಮತ್ತು ಸ್ವತಃ ತಾನು ಪಾಪಗಳಿಂದ ಮುಕ್ತನಾಗಿ ತನ್ನನ್ನು ನರಕದಿಂದ ರಕ್ಷಿಸಿ ಸ್ವರ್ಗದ ಶಾಶ್ವತ ಸುಖವನ್ನು ಪಡೆಯಲು ಎಲ್ಲಾ ಸುಳ್ಳು ಆರಾಧ್ಯರನ್ನು ಕೈಬಿಟ್ಟು ತನ್ನ ಏಕೈಕ ಸೃಷ್ಠಿಕರ್ತ ಪಾಲಕ ಪ್ರಭುವಿಗೆ ತನ್ನನ್ನು ಅರ್ಪಿಸಿ ಕೊಳ್ಳಬೇಕಾಗಿದೆ.
ಅವನು ಇದಕ್ಕೆ ಸಿದ್ಧನೆಂದಾದರೆ ಈ ಪ್ರಮಾಣವನ್ನು ಮಾಡಲಿ,
‘ಅಷ್ಹದು ಅಲ್ಲಾ ಇಲಾಹ ಇಲ್ಲಲ್ಲಾ ವಅಷ್ಹದು ಅನ್ನ ಮುಹಮ್ಮದನ್ ಅಬ್ದುಹುವ ರಸೂಲುಹು’.
“ನಾನು ಪ್ರಮಾಣ ಮಾಡುತ್ತೇನೆ, ಅಲ್ಲಾಹನ ಹೊರತು ಇನ್ನಾರೂ ಪೂಜೆಗೆ ಅರ್ಹರಲ್ಲ. ಅವನು ಏಕೈಕನಾಗಿರುವನು. ಅವನಿಗೆ ಯಾರು ಸಹಭಾಗಿಗಳಿಲ್ಲ ಮತ್ತು ನಾನು ಪ್ರಮಾಣವಾಗಿ ನುಡಿಯುತ್ತೇನೆ. ನಿಶ್ಚಯವಾಗಿಯೂ ಮುಹಮ್ಮದ್{ಸ} ಅಲ್ಲಾಹನ ದಾಸರೂ, ಅವನ ಸಂದೇಶವಾಹಕರೂ ಆಗಿರುತ್ತಾರೆ”.
ಪವಿತ್ರ ವಚನದ ಮಹತ್ವ
ಮುಹಮ್ಮದ್{ಸ}ರವರು ಹೇಳಿದ್ದಾರೆ : “ ಯಾವ ವ್ಯಕ್ತಿಯ ಅಲ್ಲಾಹನ ಹೊರತು ಬೇರೆ ಯಾರೂ ಆರಾಧ್ಯರಿಲ್ಲವೆಂದು ಒಪ್ಪಿಕೊಂಡು ಅದಕ್ಕೆ ಬದ್ಧನಾದ ಸ್ಥಿತಿಯಲ್ಲಿ ಮರಣ ಹೊಂದಿದರೆ ಅವನು ಸ್ವರ್ಗಕ್ಕೆ ಹೋಗುವನು”.(ಮುಸ್ಲಿಂ)
ದೇವನು ಯಾರು?
ದೇವನು ಒಬ್ಬನೇ. ಅನೇಕರಾಗಿ ಇರುವವರು ದೇವರಲ್ಲ.
ಅವನು ನಿರಪೇಕ್ಷನು. ಅಪೇಕ್ಷೆ ಉಳ್ಳವರು ದೇವರಲ್ಲ. ಸೃಷ್ಠಿಗಳು ಅವನ ಅವಲಂಬಿತರು.
ಅವನು ಯಾರಿಂದಲೂ ಜನಿಸಿಲ್ಲ, ಜನಿಸಿದವನು ದೇವನಲ್ಲ, ಅವನಿಂದ ಯಾರು ಜನಿಸಿಲ್ಲ, ಮಡದಿ-ಮಕ್ಕಳು ಇರುವವನು ದೇವರಲ್ಲ.
ಅವನ ಸರಿಸಮಾನರು ಯಾರೂ ಇಲ್ಲ. ಅವನಿಗೆ ಜನನ-ಮರಣವಿಲ್ಲ. ಅವನು ಸರ್ವಶಕ್ತನು. ಸರ್ವ ವಸ್ತುಗಳಲ್ಲಿ ಸಾಮಥ್ರ್ಯವುಳ್ಳವನು. ಅವನು ಏಳು ಆಕಾಶದ ಮೇಲಿರುವ ವಿಶ್ವಸಿಂಹಾಸನದ ಮೇಲೆ ವಿರಾಜಿಸುತ್ತಿದ್ದಾನೆ.
“ನಿಶ್ಚಯವಾಗಿಯೂ ಶಿರ್ಕ್(ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಯನ್ನಾಗಿ) ಮಾಡುವುದು ಮಹಾ ಅಕ್ರಮವಾಗಿದೆ”. (ಖುರ್ಆನ್:31:13)
ಮಸೀಹ(ಏಸು) ಹೇಳಿದರು: “ಜನರೇ ನನ್ನ ಪ್ರಭುವೂ, ನಿಮ್ಮ ಪ್ರಭುವೂ ಆಗಿರುವ ಅಲ್ಲಾಹನ ಆರಾಧನೆ ಮಾಡಿರಿ.
ಅಲ್ಲಾಹನೊಂದಿಗೆ ಇನ್ನಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನಿಗೆ ಅಲ್ಲಾಹನು ಸ್ವರ್ಗವನ್ನು ನಿಷಿದ್ಧಗೊಳಿಸಿರುತ್ತಾನೆ. ಅವನ ಸ್ಥಾನವು ನರಕವಾಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ”. (ಖುರ್ಆನ್: 5:72)